ಶನಿವಾರ, ಆಗಸ್ಟ್ 6, 2016

ಚಿತ್ರ-ಕಾವ್ಯ: ನಿಯತ್ತು



ಅಂಡು ಕೆರೆದುಕೊಂಡು ಹೋದ ಯಜಮಾನ
ಮತ್ತೆ ಬರಲಿಲ್ಲ!


ಕಡಲು ಬಿಕೋ ಎನ್ನುತ್ತಿದೆ
ಅಂಡಲೆಯುತ್ತಿದ್ದ ಪುಂಡ ದೋಣಿಗಳನು
ದಫನಕ್ಕೆ ತಯಾರು ಮಾಡುವಂತೆ
ದಡದಲ್ಲಿ ಸುತ್ತಿಡಲಾಗಿದೆ,
ಅಲೆಗಳು ನಾಲಗೆ ರುಚಿ ಕಳಕೊಂಡಂತೆ
ಮನುಷ್ಯರ ಕಾಲು ನೆಕ್ಕಿ ಸುಮ್ಮಗಾಗುತ್ತಿವೆ;


ಯಾರೂ ಇತ್ತೀಚೆಗೆ ಇತ್ತ ಸುಳಿಯುತ್ತಲೇ ಇಲ್ಲ


ಸಣ್ಣಪುಟ್ಟ ಚಿಪ್ಸು ಪ್ಯಾಕೇಟುಗಳಲಿ ಉಳಿದದ್ದನ್ನು
ನಿಯತ್ತಿನಿಂದ ಚಪ್ಪರಿಸುತ್ತಿದ್ದ ನಾಯಿಗಳು
ಹೋದ ಯಜಮಾನನ ಕಾಯುತ್ತಿವೆ;


ಕಾಯದೇನು ಮತ್ತೆ?!
ಹಿಡಿದ ಮೀನುಗಳಲಿ
ಕೊಳೆತವು ಅವಕ್ಕೇ ತಾನೇ?


ನಿಯತ್ತು
ಯಜಮಾನನ ಬಿಟ್ಟು ಹೋದರೂ
ಮೂಕಪ್ರಾಣಿ ಬಿಡಲೊಲ್ಲದು!

                       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ