ಇವತ್ತು
ಮುಖದ ತುಂಬಾ ನಾವು
ಬಣ್ಣ ಬಳಿದುಕೊಳ್ಳೋಣ
"ಕೇಸರಿಯೇ ಯಾಕೆ ಬೇಕು?
ಅದು ಭಕ್ತರದ್ದಲ್ಲವೆ?"
ನೀವು ಗುನುಗುತ್ತಿರಬಹುದು
ಇವತ್ತೊಂದಿನ ಸಹಿಸಿಕೊಳ್ಳಿ,
ಇವತ್ತದು ನಮ್ಮದು
"ಬಿಳಿಯದೇಕೇ?
ಶಾಂತಿಯುತವಾಗಿ ಮಂತಾಂತರಕ್ಕಿಳಿಯಲೇ?"
ನೀವು ಮತ್ತೊಬ್ಬನ ಕಿವಿಯಲ್ಲುಸುರಬಹುದು
ಪರ್ವಾಗಿಲ್ಲ,
ನಾಟಕಕಷ್ಟೇ ತೊಡೋಣ
"ಹಸಿರೇಕೆ?
ಅವರ ಮನೆಯ ಬಿರಿಯಾನಿ ತಿಂದವರೇನು ನೀವು!"
ಎಂದು ಕಿಡಿಕಾರದಿರಿ
ಮಾತು ಕೇಳಿ,
ಸ್ವಲ್ಪ ಸಹಿಸಿಕೊಳ್ಳೋಣ
ಇವತ್ತೊಂದಿನ
ಮೂರನ್ನೂ ಜತೆಗೆ ಹೊಲಿದುಕೊಳ್ಳೋಣ
ನಾಳೆ ಅವರವರ ಬಣ್ಣ
ಅವರವರ ಕೈಗೊಪ್ಪಿಸೋಣ